ಮರದ ಮಹತ್ವ

ನಮ್ಮ ಶಾಲೆ ಪಕ್ಕ
ರಸ್ತೆ ಇರುವುದು ಅಕ್ಕ
ಆ ರಸ್ತೆಗೆಲ್ಲ ಹೊಂದಿ
ಬಸ್‌ಸ್ಟ್ಯಾಂಡ್ ಭಾಳ ಮಂದಿ

ಬಸ್ಸಿಗಾಗಿ ಅಲ್ಲಿ
ಸುಡುವಾ ಬಿಸಿಲಲ್ಲಿ
ಮಳೆಯ ಕಾಲದಲ್ಲಿ
ಬೇಡ ಫಜೀತಿ ಇಲ್ಲಿ

ಮೇಷ್ಟ್ರು ಒಂದು ದಿನ
ಕೊಟ್ಟರು ನೆಡಲು ಸಸಿಯನ್ನ
ರಂಗ ರಾಮು ನೆಟ್ಟರು
ದಿನವೂ ನೀರು ಬಿಟ್ಟರು

ಸಸಿಯು ವೇಗದಿ ಬೆಳೆದಿತ್ತು
ಹೆಮ್ಮರವಾಗಿ ನಿಂತಿತ್ತು
ರೆಂಬೆಯ ಹೊರಗೆ ಚಾಚಿತ್ತು
ಜನರಿಗೆ ನೆರಳ ನೀಡಿತ್ತು.

ಮಕ್ಕಳ ಕೆಲಸ ಹೊಗಳಿದರು
ಗುರುಗಳು ಪುಲಕಿತರಾದರು
ಸ್ವಾತಂತ್ರ್ಯ ದಿನಾಚರಣೆಯ ದಿನ
ಈ ಮಕ್ಕಳಿಗಾಯ್ತು ಸನ್ಮಾನ

ದೊಡ್ಡವರಾದ ಮೇಲಿವರು
ಶಾಲಾ ಮಾಸ್ತರರಾದರು
ಕೆಲಸ ಮಾಡಿದ ಕಡೆಗೆಲ್ಲ
ಅರಳಿತು ಹಸಿರು ಬನವೆಲ್ಲ

ಮೆಚ್ಚಿದ ಅವರ ಕೆಲಸವನು
ಸರ್ಕಾರ ಇತ್ತಿತು ಬಹುಮಾನ
ಮಕ್ಕಳಗವರೀ ಬೋಧನೆ
ಇದೂ ದೇಶ ಸೇವೇನೇ

ಬಯಲು ಸ್ಥಳದಲಿ ಕಾಡು
ಬೆಳಸಿದರೆಷ್ಟು ನೋಡು
ವಾಯು ಮಾಲಿನ್ಯ ಇಲ್ಲ
ಸಮೃದ್ಧಿ ಮಳೆ ಬೆಳೆಯೆಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರೆತು ಗೂಡನು ಹಕ್ಕಿ ಮನೆಯೊಳಗೆ ಬಂದಿಹುದು
Next post ನಗುನಗುತ್ತಾ ದಿನವನ್ನು ಸ್ವಾಗತಿಸಿ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

cheap jordans|wholesale air max|wholesale jordans|wholesale jewelry|wholesale jerseys